ತೀರಾ ಸಂಪ್ರದಾಯದ ಚೌಕಟ್ಟಿನಲ್ಲಿ ಬೆಳೆದ ಸೌಭಾಗ್ಯಳಿಗೆ ವಾದ್ಯ ಸಂಗೀತದಲ್ಲಿ ಅಪಾರ ಆಸಕ್ತಿ. ಅವಕಾಶ ಹುಡುಕಿಕೊಂಡು ಬೆಂಗಳೂರಿಗೆ ಬರುತ್ತಾಳೆ. ಅಲ್ಲಿ ಪತ್ರಿಕೆಯ ಜಾಹೀರಾತು ನೋಡಿ ಸಂದರ್ಶನಕ್ಕೆ ಹೋಗುತ್ತಾಳೆ. ಅವಳು ಆಯ್ಕೆಯಾಗಿ ಹಾಡಬೇಕಿರುವುದು ಪಬ್ ಒಂದರಲ್ಲಿ. ಒಂದೆಡೆ ಬಡತನ ಇನ್ನೊಂದೆಡೆ ಅವಕಾಶ. ಕೊನೆಗೂ ಅಲ್ಲಿ ಸೇರುತ್ತಾಳೆ. ಅವಳ ಬದುಕಿನಲ್ಲಿ ಮಂಜಿನ ಬಿಂದುವಾಗಿ ಕಾಣಿಸಿಕೊಳ್ಳುವವನು ಶ್ರೀಮಂತ ಆ ಪಬ್ ನ ಗಿರಾಕಿ ಸಂಕರ್ಷ. ಅವಳ ಕನಸು ಸಾಕಾರಗೊಳ್ಳುತ್ತದೆಯೇ? ಉತ್ತರ ಇದೆ ಇಲ್ಲಿ.