Availability: In Stock

Bharathada Swaathanthrya Horaata | ಭಾರತದ ಸ್ವಾತಂತ್ರ್ಯ ಹೋರಾಟ 60 ಅಗ್ರಗಣ್ಯ ನಾಯಕರು

SKU: 9788184683301

Original price was: ₹180.00.Current price is: ₹154.00.

Already sold: 0/2
Estimated delivery dates: Dec 18, 2024 - Dec 20, 2024

Description

ಪರಕೀಯರ ಬಿಗಿ ಮುಷ್ಟಿಯ ಹಿಡಿತಕ್ಕೆ ಸಿಲುಕಿ ನಲುಗಿದ್ದ ನಮ್ಮ ದೇಶ ೧೯೪೭ರ ಆಗಸ್ಟ್ ೧೫ರಂದು ಸರ್ವ ಸ್ವತಂತ್ರವಾದಾಗ ದೇಶದ ಇಡೀ ಜನತೆ ಸಂಭ್ರಮೋಲ್ಲಾಸಗಳಿಂದ ನಲಿಯಿತು. ಈ ಸ್ವಾತಂತ್ರ್ಯ ಗಳಿಕೆಯ ಹಿಂದೆ ಅಗಣಿತ ಮಂದಿಯ ಅಪಾರ ಪರಿಶ್ರಮದ, ಅಸಾಮಾನ್ಯ ಧೈರ್ಯದ, ಆಳ ದೇಶನಿಷ್ಠೆಯ ಹೋರಾಟವಿದೆ, ಅನೇಕರ ಬಲಿದಾನವಿದೆ. ಈ ಚರಿತ್ರಾರ್ಹ ಹೋರಾಟಕ್ಕೆ ಪ್ರೇರಣೆಯಾಗಿ, ಅದರಲ್ಲಿ ತಾವೂ ಭಾಗಿಯಾಗಿ ದೇಶದ ಕಣ್ಮಣಿಗಳೆನಿಸಿದ ಅನೇಕ ನಾಯಕರ ಯಾದಿಯೇ ನಮ್ಮ ಕಣ್ಣ ಮುಂದಿದೆ.
ಹಿರಿಯ ಲೇಖಕ ಜಿ.ಎಂ. ಕೃಷ್ಣಮೂರ್ತಿಯವರು ಅಪಾರ ಶ್ರಮವಹಿಸಿ ರೂಪಿಸಿಕೊಟ್ಟಿರುವ ಈ ಕೃತಿಯು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾದ ೬೦ ಪ್ರಮುಖ ನಾಯಕರ ಚಿತ್ರಣವನ್ನು ಮನದುಂಬುವಂತೆ ಚಿತ್ರಿಸುತ್ತದೆ. ಮಹಾತ್ಮ ಗಾಂಧಿ, ರಾಜೇಂದ್ರ ಪ್ರಸಾದ್, ವಿನೋಬಾ ಭಾವೆ, ವಲ್ಲಭಬಾಯಿ ಪಟೇಲ್, ಜವಾಹರಲಾಲ್ ನೆಹರೂ, ಲಾಲಾ ಲಜಪತ್ರಾಯ್, ಭಗತ್ ಸಿಂಗ್, ಸುಭಾಷ್ಚಂದ್ರ ಬೋಸ್, ರಾಮಮನೋಹರ ಲೋಹಿಯಾ ಮೊದಲಾದವರ ದೇಶಭಕ್ತಿ, ಕಾರ್ಯ ನಿಷ್ಠೆ, ಸಂಘಟನಾ ಚಾತುರ್ಯಗಳನ್ನು ಅರಿಯುವುದೇ ಒಂದು ಚೇತೋಹಾರಿ ಅನುಭವ. ಸರಳ ಶೈಲಿಯ ಈ ಕೃತಿ ಓದುಗರ ಅದರಲ್ಲೂ ವಿಶೇಷವಾಗಿ ವಿದ್ಯಾರ್ಥಿಗಳ ಮನ ಒಪ್ಪುವಂತಿದೆ ಎಂಬುದು ನಮ್ಮ ವಿಶ್ವಾಸ.

Additional information

Weight 0.2 kg
Dimensions 21 × 14 × 2 cm

Reviews

There are no reviews yet.

Only logged in customers who have purchased this product may leave a review.