Kowshik Koodurasthe

Kowshik Koodurasthe

ಕೌಶಿಕ್ ಕೂಡುರಸ್ತೆ ವೃತ್ತಿಯಿಂದ ಸಹಾಯಕ ನಿರ್ದೇಶಕರಾಗಿದ್ದು, ಮೂಲತಃ ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಕೂಡುರಸ್ತೆ ಗ್ರಾಮದವರು. ಅವರ ತಂದೆ ಹಚ್.ಎಸ್. ತಮ್ಮೇಗೌಡ ಮತ್ತು ತಾಯಿ ಭಾಗ್ಯ. ಅವರು ಆಚಾರ್ಯ ಇನ್ಸ್ಟಿಟ್ಯೂಟ್‌ನಲ್ಲಿ ಏರೋನಾಟಿಕಲ್ ಇಂಜಿನಿಯರಿಂಗ್ ಪದವಿಯನ್ನು ಪಡೆದಿದ್ದು, ಜೊತೆಗೆ ಸಾಹಿತ್ಯ ಕ್ಷೇತ್ರದಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

ಸಾಹಿತ್ಯಯಾತ್ರೆ:

  •  “ಹೃದಯದ ಮಾತು” – ಅವರ ಮೊದಲ ಪ್ರಕಟಿತ ಕವನ ಸಂಕಲನ
  • “ಇಂತಿ ನಿಮ್ಮ ಆತ್ಮೀಯ” – ಅವರ ಎರಡನೇ ಕಾದಂಬರಿ, ಇದು ಎರಡನೇ ಮುದ್ರಣವನ್ನು ಕಂಡಿದೆ ಮತ್ತು ಬಹ್ರೇನ್ ಕನ್ನಡ ಡಿಂಡಿಮ ಸಮಾರಂಭದಲ್ಲಿ ಪ್ರದರ್ಶನಗೊಂಡಿದೆ.
  •  “ಕಾಲಯ ತಸ್ಮೈ ನಮಃ”, “ಸ್ವಪ್ನದ ಬೆನ್ನೇರಿ” ಮತ್ತು “ತ್ಯಾಗರಾಜ್ ಕಾಲೋನಿ” – ಇವರ ಪತ್ತೇದಾರಿ ಕಾದಂಬರಿಗಳು, ಇವು ಸ್ನೇಹ ಬುಕ್ ಹೌಸ್ ಮೂಲಕ ಪ್ರಕಟಗೊಂಡಿವೆ.
  • ಸಿನಿಮಾ ಮತ್ತು ನಿರ್ದೇಶನ:

 “ದಾನವ” ಸೇರಿದಂತೆ ಹಲವಾರು ಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ. “ಆಟೋಶಂಕ್ರಿ” ಎಂಬ ಕಿರುಚಿತ್ರವನ್ನು ನಿರ್ದೇಶಿಸಿದ್ದಾರೆ. ತಮ್ಮ ಬರಹಗಳನ್ನು ಸಿನಿಮಾರೂಪಕ್ಕೆ ತರುವುದು ಅವರ ಭವಿಷ್ಯದ ಗುರಿಯಾಗಿದೆ.

ಬಿಸಿನೆಸ್ ಕುರಿತ ಬರಹಗಳು:

 “ಬಿಸಿನೆಸ್ ಮತ್ತು ನಾನು” ಮತ್ತು “ಬಿಸಿನೆಸ್ ಚಾಣಕ್ಯ” – ಗ್ರಿಫಿನ್ಸ್ ಗುರುಕುಲ ಸಂಸ್ಥೆಗೆ ನಿರೂಪಣೆ ಮಾಡಿದ ಕೃತಿಗಳು. ಕೌಶಿಕ್ ಕೂಡುರಸ್ತೆ ಅವರು ಸಾಹಿತ್ಯ ಹಾಗೂ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಲು ಮುಂದಾಗಿದ್ದಾರೆ.

Books By Kowshik Koodurasthe